

2nd January 2026

ಕುಷ್ಟಗಿ : ಪಟ್ಟಣದ ನಿವಾಸಿಗಳಾದ ವಿಶ್ವಕರ್ಮ ಸಮಾಜದ ಶ್ರೀಕಾಂತ ಬಡಿಗೇರ್ (51 ವರ್ಷ) ಇವರು ಇಂದು ದಿನಾಂಕ: 02-01-2026 ಶುಕ್ರವಾರದಂದು ಬೆಳಗಿನ ಜಾವ 3-00 ಗಂಟೆಗೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ನಿಂದಾಗಿ ನಿಧನ ರಾಗಿರುತ್ತಾರೆ.
ಮೃತರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳು ಹಾಗೂ ಧರ್ಮಪತ್ನಿ ಮತ್ತು ಅಣ್ಣಂದಿರಾದ
ಶಂಕ್ರಪ್ಪ ಬಡಿಗೇರ್ ಮತ್ತು ಗಂಗಾವತಿ ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷರಾದ ಕಾಳೇಶ್ ಬಡಿಗೇರ್
ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃದು ಸ್ವಭಾವದ ಶ್ರೀಕಾಂತ ಬಡಿಗೇರ್ ಇವರು ಕುಷ್ಟಗಿ ನಗರದ ಕೃಷ್ಣಗಿರಿ ಕಾಲೋನಿಯಲ್ಲಿ ಸ್ವಂತ ಬಡಗಿತನದ ಉದ್ಯೋಗ ಮಾಡಿಕೊಂಡಿದ್ದರು. ಹಾಗೂ ವೈಯಕ್ತಿಕವಾಗಿ ನಮಗೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.
ಇವರ ಅಂತ್ಯಕ್ರಿಯೆಯು ಗಂಗಾವತಿಯಲ್ಲಿ ಸಾಯಂಕಾಲ 5-30 ಗಂಟೆಗೆ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಸದ್ಗತಿ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಸ್ ಕುಷ್ಟಗಿ.🙏🙏

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ